ಹಾಸನ: ಪ್ರಸ್ತುತ ಸನ್ನಿವೇಶದಲ್ಲಿ ನೀರು ಬಂಗಾರಕ್ಕೆ ಸಮ ನಾಗಿದ್ದು, ನಾಲೆಯಲ್ಲಿ ಹರಿಸುತ್ತಿರುವ ಪ್ರತಿ ಹನಿಯನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ನುಡಿದರು. ಅರಕಲಗೂಡು ಸಮೀಪದ ಹೇಮಾವತಿ ಜಲಾಶಯದ ಹೇಮಾವತಿ ಬಲ ಮೇಲ್ದಂಡೆ ಆರಂಭದ ಗೇಟ್ ಬಳಿ ಬೋರಣ್ಣ ಗೌಡ ನಾಲೆಗೆ ನೀರು ಹರಿಸಿ ಪೂಜೆ ಸಲ್ಲಿಸಿದ ರಲ್ಲದೆ, ಬಾಗಿನ ಅರ್ಪಿಸಿ ಮಾತನಾಡಿದರು. ಸುಮಾರು 10 ವರ್ಷಗಳ ಕಾಲ ಬರ ಆವರಿಸಿತ್ತು. ಜಲಾಶಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬೋರಣ್ಣಗೌಡ ನಾಲೆಗೆ ಜೂನ್ ತಿಂಗಳಲ್ಲೇ…