ಹಾಸನ: ನಗರದ ಹೊರ ವಲಯದಲ್ಲಿರುವ ಹುಣಸಿನಕೆರೆ ತ್ಯಾಜ್ಯಗಳ ಸಮ್ಮಿಶ್ರಣದಲ್ಲಿ ಸಂಪೂರ್ಣ ಕಲುಷಿತಗೊ ಳ್ಳುತ್ತಿದ್ದು, ಅಳಿವಿನ ಅಂಚಿನತ್ತ ಸಾಗುತ್ತಿದೆ. ಬಡವರ ಊಟಿ ಎಂದೇ ಕರೆಯಲ್ಪ ಡುವ ಹಾಸನ ನಗರದಲ್ಲಿ ಈಗ ಎಲ್ಲಿ ನೋಡಿದರೂ ಸಿಮೆಂಟ್ ಕಟ್ಟಡಗಳೇ ಎದ್ದುನಿಂತಿದ್ದು, ನಗರದ ಜನತೆ ಮನೆ ಮಂದಿಯೊಂದಿಗೆ ರಜೆ ಕಳೆಯಲು ಮನಸ್ಸಿಗೆ ನೆಮ್ಮದಿಕೊಡುವಂತ ನೈಸರ್ಗಿಕ ಪ್ರದೇಶಗಳನ್ನು ಬೂದು ಕನ್ನಡಿಯಲ್ಲಿ ಹುಡುಕುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರತಿ ವರ್ಷ ದೇಶ-ವಿದೇಶ ಗಳಿಂದ ಕೆರೆ ಅಂಗಳಕ್ಕೆ ವಲಸೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆಯೂ ಕ್ಷೀಣ ಸುತ್ತಿದ್ದು, ಪಕ್ಷಿ…