ಮೈಸೂರು: ಕುತ್ತಿಗೆ ಅದುಮಿ ವ್ಯಕ್ತಿಯನ್ನು ಹತ್ಯೆಗೈದಿರುವ ಘಟನೆ ಬಿಳಿಕೆರೆ ಸಮೀಪ ಆರ್ಎಂಪಿ ಕ್ವಾರ್ಟರ್ಸ್ ಬಳಿ ಹುಣಸೂರು ರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು, ಹುಲಿಕೆರೆ ಗ್ರಾಮದ ಪುಟ್ಟಲಿಂಗಣ್ಣ ಅವರ ಮಗ ಶಿವಕುಮಾರ್ (30) ಕೊಲೆಯಾದವರು. ಮೈಸೂರಿನ ಇನ್ಫೋಸಿಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅವರ ಮೃತದೇಹ ಬಿಳಿಕೆರೆ ಸಮೀಪ ಚಿಕ್ಕಾಡಿಗನಹಳ್ಳಿ ಗೇಟ್ ಬಳಿ ಹುಣಸೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಯಿತು. ಟವಲ್ನಿಂದ ಕುತ್ತಿಗೆ ಹಿಸುಕಿ ಶಿವಕುಮಾರ್ನನ್ನು ಹತ್ಯೆಗೈದು ಆಗಂತುಕರು…