ಮೈಸೂರು: ಚಿನ್ನ ಸೇರಿದಂತೆ ಇತರೆ ಚರಾಸ್ತಿಗಳ ಮೇಲೆ ಭಾವನಾತ್ಮಕ ಚಿಂತನೆಯೊಂದಿಗೆ ಹೆಚ್ಚಿನ ಬಂಡವಾಳ ಹೂಡಿದರೆ, ಯಾವುದೇ ಪ್ರಯೋಜನವಿಲ್ಲ ಎಂದು ಷೇರುಪೇಟೆ ಬಂಡವಾಳ ಹೂಡಿಕೆ ತರಬೇತುದಾರ ಡಿ.ಜಿ.ಬಾಲಾಜಿ ರಾವ್ ಅಭಿಪ್ರಾಯಪಟ್ಟರು. ಜೆಎಲ್ಬಿ ರಸ್ತೆಯ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ) ಮೈಸೂರು ಘಟಕ ಹಾಗೂ ಪ್ರೂಡೆಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸ್ಸ್(ಲಿ), ಹೆಚ್ಡಿಎಫ್ಸಿ ಮ್ಯೂಚುಯಲ್ ಫಂಡ್ ಸಹಯೋಗದೊಂದಿಗೆ ಆಯೋಜಿಸಿದ್ದ `ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೂಡಿಕೆದಾರರು ಭಾವನಾತ್ಮಕವಾಗಿ ಅಗತ್ಯಕ್ಕಿಂತ…