ನವದೆಹಲಿ, ಜ.2- ಭಾರತೀಯ ಬಾಹ್ಯಾಕಾಶ ಸಂಸ್ಥೆ 2022ರಲ್ಲಿ ಕೈಗೊಳ್ಳಲಿರುವ ಪ್ರಪ್ರಥಮ ಮಾನವ ಸಹಿತ ಅಂತರಿಕ್ಷ ಯಾನಕ್ಕೆ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್ಗಳು ಆಯ್ಕೆಯಾಗಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಶಿವನ್, ಆಯ್ಕೆಯಾದ ನಾಲ್ವರು ಪೈಲಟ್ಗಳಿಗೆ ಭಾರತ ಮತ್ತು ರಷ್ಯಾದಲ್ಲಿ ವೈದ್ಯಕೀಯ ತಪಾಸಣೆಗಳನ್ನೂ ಮಾಡಲಾಗಿದೆ. ಅಲ್ಲಿ ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲದೆ, ಮಾನವ ಸಹಿತ ಅಂತರಿಕ್ಷ ಯಾನದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಂತರಿಕ್ಷ ಯಾನಕ್ಕೆ ಆಯ್ಕೆಯಾಗಿರುವ…
ಮೈಸೂರು
ಚಂದ್ರಯಾನ-2 ಯಶಸ್ವಿ ಉಡಾವಣೆ
July 23, 2019ಶ್ರೀಹರಿಕೋಟ: ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ-2 ಗಗನ ನೌಕೆ ನಭಕ್ಕೆ ಜಿಗಿದಿದೆ. ಜು.15ರಂದು ಉಡಾಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಇಂದು (ಸೋಮವಾರ) ಮಧ್ಯಾಹ್ನ ಸರಿಯಾಗಿ 2.43ಕ್ಕೆ ವ್ಯೋಮ ನೌಕೆಯನ್ನು ಹೊತ್ತ `ಬಾಹುಬಲಿ’ ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಿತು. ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದಂತೆ `ಚಂದ್ರಯಾನ-2′ ಕೋಟಿ ಕೋಟಿ ಕನಸುಗಳನ್ನು ಹೊತ್ತು ಚಂದ್ರನಲ್ಲಿಗೆ ಸಾಗುತ್ತಿದೆ. ಜು.15ರಂದು ಉಡಾಯನ ಗೊಳ್ಳಬೇಕಿದ್ದ ಬಾಹುಬಲಿ ತಾಂತ್ರಿಕ ದೋಷದಿಂದ ಜುಲೈ 22ಕ್ಕೆ ಮುಂದೂ…