ಮೈಸೂರು: ಸ್ಥಾನಕವಾಸಿ ಜೈನ ಸಂಘ ಮತ್ತು ಶ್ರೀ ಸುಮತಿನಾಥ ಜೈನ ಮೂರ್ತಿಪೂಜಕ ಸಂಘದ ಜೈನ ಮುನಿಗಳಾದ ಡಾ. ಶ್ರೀ ಸಮಕ್ತಿ ಮುನಿಜೀ ಮಹಾರಾಜ್, ಶ್ರೀ ಭವಂತ ಮುನಿಜೀ ಮಹಾರಾಜ್ ಮತ್ತು ಶ್ರೀ ಜಯವಂತ ಮುನಿಜೀ ಮಹಾರಾಜ್ ಅವರು ಚಾತುರ್ಮಾಸ ಪೂಜೆಗಾಗಿ ಇಂದು ಮೈಸೂರಿಗೆ ಆಗಮಿಸಿದರು. ಜುಲೈನಿಂದ ಅಕ್ಟೋಬರ್ವರೆಗೆ ನಡೆಯುವ ಚಾತುರ್ಮಾಸಕ್ಕಾಗಿ ಆಗಮಿಸಿದ ಜೈನಮುನಿ ಶ್ರೀಗಳನ್ನು ಮೈಸೂರಿನ ಫೌಂಟನ್ ಸರ್ಕಲ್ ಬಳಿ ಜೈನ ಸಂಘಟನೆಗಳ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಅಶೋಕ ರಸ್ತೆ ಮೂಲಕ ಮೆರವಣಿಗೆಯಲ್ಲಿ ಹಳ್ಳದಕೇರಿಯಲ್ಲಿರುವ ಶ್ರೀ ಸ್ಥಾನಿಕವಾಸಿ…