ಬೆಂಗಳೂರು: ನೀರು, ಮಜ್ಜಿಗೆ, ಬಿಸ್ಕತ್ ನೀಡಿ, ಸಾರ್ವ ಜನಿಕ ಕಷ್ಟ ಸುಖಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮೊದಲ ಜನತಾ ದರ್ಶನ ಕಾರ್ಯಕ್ರಮದಲ್ಲಿ ಆಲಿಸಿದ್ದಾರೆ. ಮೂರು ಗಂಟೆ ತಡವಾಗಿ ಜನತಾದರ್ಶನ ಕಾರ್ಯಕ್ರಮ ನಡೆಸಿದ ಮುಖ್ಯಮಂತ್ರಿಯವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಹಿಡಿದರೆ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿ ಗಳಿಗೆ ಆದೇಶಿಸಿದರು. ಸಾವಿರಕ್ಕೂ ಹೆಚ್ಚು ಅಹವಾಲು ಸಲ್ಲಿಸಿದರು. ಬಹುತೇಕರು ಹಿರಿಯ ನಾಗರಿಕರಾಗಿದ್ದರು. ಅವರೆಲ್ಲರೂ ತಮ್ಮ ಮಾಸಿಕ ವೇತನ ದುಪ್ಪಟ್ಟು ಮಾಡಿ, ಉಚಿತ ವೈದ್ಯಕೀಯ ಸೇವೆ ಕಲ್ಪಿಸಿ, ರಿಯಾಯಿತಿ ಬಸ್…