ಮೈಸೂರು: ಮೈಸೂರಿನ ಜಯ ಚಾಮರಾಜ ಒಡೆಯರ್ ವೃತ್ತದ ಸುತ್ತಲೂ ರಸ್ತೆಗಿಂತ ಅರ್ಧ ಅಡಿಗೂ ಕಡಿಮೆ ಎತ್ತರಕ್ಕೆ ಕಟ್ಟೆ ನಿರ್ಮಿಸಿದ್ದು, ವಾಹನಗಳ ಟೈರ್ ಹರಿದು, ಒಂದು ಭಾಗದಲ್ಲಿ ಜಖಂಗೊಂಡಿದೆ. ಪ್ರತಿಮೆಯ ಎಡಭಾಗಕ್ಕಿರುವ ಕಟ್ಟೆಯ ಮೇಲೆ ವಾಹನಗಳು ಚಾಲಿಸಿರುವುದರಿಂದ ಅನೇಕ ಮಾರ್ಬಲ್ಗಳು ಒಡೆದು, ಪುಡಿಯಾಗಿವೆ. ಕೂಡಲೇ ಇದನ್ನು ದುರಸ್ತಿ ಮಾಡಬೇಕಿದೆ. ಇಲ್ಲವಾದರೆ ಗನ್ಹೌಸ್ ಕಡೆಯಿಂದ ಹಾಗೂ ಲೋಕರಂಜನ್ ರಸ್ತೆ ಹಾಗೂ ನಜರ್ಬಾದ್ ಕಡೆಯಿಂದ ಬರುವ ವಾಹನಗಳು ವೃತ್ತವನ್ನು ಸುತ್ತುವಾಗ ಜಖಂ ಅಗಿರುವ ಭಾಗಕ್ಕೆ ಟೈರ್ ತಗುಲಿ, ಮತ್ತಷ್ಟು ಮಾರ್ಬಲ್ಗಳು ಹಾಳಾಗಲಿವೆ….