ಜಯಪುರ, ಮೇ 26(ಬಿಳಿಗಿರಿ)-ಮೈಸೂರು ತಾಲೂಕಿನ ಜಯಪುರ ಹೋಬಳಿಯಾದ್ಯಂತ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿರುವ ತೋಟಗಾರಿಕೆ ಬೆಳೆ ನಾಶವಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಹೋಬಳಿಯ ತಳೂರು ಕೆರೆಹುಂಡಿ, ಗೋಪಾಲಪುರ, ಬೀರಿಹುಂಡಿ, ದೂರ, ಹಾರೋಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 150 ಎಕರೆಯಷ್ಟು ಬಾಳೆ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಕೆರೆಹುಂಡಿ, ಗೋಪಾಲಪುರ, ಡಿ.ಸಾಲುಂಡಿಯಲ್ಲಿ ಮನೆಗಳು ಕುಸಿದಿದ್ದು, ಬಿರುಗಾಳಿಗೆ ಮನೆಯ ಚಾವಣಿ ಹಾರಿಹೋಗಿವೆ. ದಡದಹಳ್ಳಿ ಮತ್ತು ಸಿಂಧು ಹಳ್ಳಿಯಲ್ಲಿ ರೈತರ ಟೊಮೊಟೊ, ಮಂಗಳೂರು ಸೌತೆಕಾಯಿ ಬೆಳೆ…