ಮೈಸೂರು: ಜನಸಾಮಾನ್ಯರಿಗೆ ಅನುಕೂಲ ಆಗುವಂತಹ ಸಂಶೋಧನೆಗಳು ಹೆಚ್ಚಾದರೆ ಮಾತ್ರ ಸಂಶೋಧನೆಗಳಿಗೆ ಹೆಚ್ಚು ಮಹತ್ವ, ಅರ್ಥ ಸಿಗುತ್ತವೆ ಎಂದು ಮೈಸೂರಿನ ಸಿಎಸ್ಐಆರ್-ಸಿಎಫ್ಟಿಆರ್ಐ ನಿರ್ದೇಶಕ ಜೀತೇಂದ್ರ ಜೆ.ಜಾದವ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಸಿಎಫ್ಟಿಆರ್ಐ ಸಭಾಂಗಣದಲ್ಲಿ `ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಇಂದು ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಅವುಗಳಿಗೆ ಕಾಡಿನಲ್ಲಿ ಆಹಾರದ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂಶೋಧಕರು, ಕಾಡು ಪ್ರಾಣಿಗಳು ನಾಡಿಗೆ ಬರದೆ ಕಾಡಿನಲ್ಲಿ ಅವುಗಳಿಗೆ ಆಹಾರ…