ಮೈಸೂರು: ವಂಚಕಿಯೊಬ್ಬಳು ಸಹಾಯ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಪ್ರಜ್ಞೆ ತಪ್ಪಿಸಿ, ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಭಾನುವಾರ ಹಾಡಹಗಲೇ ನಡೆದಿದ್ದು, ನಾಗರಿಕರ ಬೆಚ್ಚಿ ಬೀಳಿಸಿದೆ. ಮೈಸೂರಿನ ಕನಕಗಿರಿ ಬಡಾವಣೆಯ ನಿವಾಸಿ ನಾಗರಾಜು ಅವರ ಪತ್ನಿ ಲಕ್ಷ್ಮೀ (40) ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಹೊಂಚು ಹಾಕಿದ್ದ ವಂಚಕಿ, ಸಹಾಯ ಕೇಳುವ ನೆಪದಲ್ಲಿ ಬಂದು, ಸುಮಾರು 300 ಗ್ರಾಂ ತೂಕದ ಚಿನ್ನಾಭರಣ ಹಾಗೂ 5 ಲಕ್ಷ ರೂ. ಹಣವನ್ನು…