ಮೈಸೂರು: ಮೈಸೂರು-ಕೊಡಗು ಮತ್ತು ಚಾಮರಾಜ ನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಾರ್ಟಿ ಪ್ರಬಲವಾಗಿದ್ದು, ಇತರೆ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಎನ್.ಮಹೇಶ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಶಿವರಾಂ ಪೇಟೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವಿಭಾಗ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನಿಷ್ಠ 2 ಲೋಕಸಭಾ ಕ್ಷೇತ್ರಗಳನ್ನಾದರೂ ಬಿಎಸ್ಪಿ ಗೆಲ್ಲಲೇಬೇಕು. ಕನಿಷ್ಠ 8ರಿಂದ 10 ಲಕ್ಷ ಮತದಾರರನ್ನು ಕ್ರೋಢೀಕರಿಸಿ, ನಮ್ಮ ಪಕ್ಷದ ರಾಷ್ಟ್ರೀಯ ಮಾನ್ಯತೆ ಉಳಿಸಿಕೊಳ್ಳ ಬೇಕಾದದ್ದು…