ಮೈಸೂರು: ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆಯೊಬ್ಬರು ಬಲಿಯಾಗಿದ್ದು, 7 ತಿಂಗಳ ಹಿಂದಷ್ಟೆ ಹಸೆಮಣೆ ಏರಿದ್ದ ಯುವತಿಯನ್ನು ಆತನ ಪತಿ ಮತ್ತು ಪತಿಯ ಪೋಷಕರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಮೈಸೂರಿನ ಕೆಸರೆಯ ಉಸ್ಮಾನಿಯಾ ಬ್ಲಾಕ್ ನಿವಾಸಿ ಸೈಯ್ಯದ್ ರುಬಾನ್ ಎಂಬುವರ ಪತ್ನಿ ಆಯೀಷಾ (19) ಎಂಬುವರೇ ಸಾವಿಗೀಡಾದವರಾಗಿದ್ದಾರೆ. ಆಂಬುಲೆನ್ಸ್ ಚಾಲಕನಾಗಿರುವ ಸೈಯ್ಯದ್ ರುಬಾನ್ ಕಳೆದ 7 ತಿಂಗಳ ಹಿಂದಷ್ಟೇ ಆಯೀಷಾ ಎಂಬುವರನ್ನು ವಿವಾಹವಾಗಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆ…