ಅರಸೀಕೆರೆ: ‘ಕೆ.ಎಸ್.ನರಸಿಂಹಸ್ವಾಮಿ ಅವರು ಬೆಲೆ ಕಟ್ಟಲಾಗದ ಕನ್ನಡ ಶಬ್ದ ಕೋಶ. ಕನ್ನಡ ನಾಡಿಗೆ ಕವಿತೆ ಮತ್ತು ಕಾವ್ಯಗಳನ್ನು ನೀಡಿದ ಆನಘ್ರ್ಯ ರತ್ನ’ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಕೆಎಸ್ಎನ್ ಮಾತು-ಕತೆ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕೆ.ಎಸ್.ಎನ್ ಬಡತನದ ಜೀವನದಲ್ಲೂ ಕವಿತೆ ಮತ್ತು ಕಾವ್ಯಗಳಿಗೆ ಹೆಚ್ಚಿನ ಆದ್ಯತೆ…