ಮೈಸೂರು: ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಶನಿವಾರ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕೆಲವು ದೇವಾಲಯಗಳಲ್ಲಿ ಭಕ್ತರು ಸಾಮೂಹಿಕ ಹೋಮ, ಹವನ ಹಾಗೂ ಶಾಂತಿ ಪೂಜೆಯಲ್ಲಿ ಪಾಲ್ಗೊಂಡರು. ಶತಮಾನದ ಕೇತುಗ್ರಸ್ಥ ರಕ್ತ ಚಂದ್ರ ಗ್ರಹಣದ ದೃಶ್ಯವನ್ನು ಕಳೆದ ರಾತ್ರಿ ಕಣ್ತುಂಬಿಕೊಡಿದ್ದ ಜನ, ಇಂದು ಬೆಳಿಗ್ಗೆ ದೇವಾಲಯಗಳ ಮೊರೆ ಹೋದರು. ಬಹುತೇಕ ದೇವಾಲಯಗಳಲ್ಲಿ ಗ್ರಹಣ ನಂತರ ಮುಂಜಾನೆಯಿಂದಲೇ ಶುದ್ಧಿಗೊಳಿಸಲಾಗಿತ್ತು. ದೇವರಿಗೆ ವಿವಿಧ ಅಭಿಷೇಕ, ಅರ್ಚನೆ ನೆರವೇರಿಸಿ ಮಹಾಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ…