ಹುಣಸೂರು: ಬಸವಣ್ಣ ನವರ ಕಾಲದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರರಾಗಿದ್ದು, ಇವರ ವಚನದಲ್ಲಿ ತೀರ ಸರಳತೆ ಮತ್ತು ಗಂಭೀರತೆ ಎದ್ದು ಕಾಣುತದೆ ಎಂದು ಸಾಹಿತಿ ಮಾಧು ಪ್ರಸಾದ್ ತಿಳಿಸಿದರು. ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಸವಿತಾ ಸಮಾಜ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರ ರಾಗಿ ಮಾತನಾಡಿದ ಅವರು, ವಚನ ಸಾಹಿತ್ಯ ದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಚನಗಳಿದ್ದು, ಅದರಲ್ಲಿ ಅಪ್ಪಣ್ಣ ನವರ 200ಕ್ಕೂ ಹೆಚ್ಚು ವಚನಗಳು ಸೇರಿವೆ…