ಗೋಣಿಕೊಪ್ಪಲು: ಇಲ್ಲಿನ ಮಾಯಾಮುಡಿ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಕೆಲವು ದಿನಗಳಿಂದ ಆತಂಕ ಮೂಡಿಸಿ ಸದಾ ಭಯದ ನೆರಳಿನಲ್ಲಿಯೇ ಬದುಕುವಂತೆ ಮಾಡಿದ್ದ ಪುಂಡಾನೆ ಯನ್ನು ಸೆರೆ ಹಿಡಿಯಲು ಮೂಲಕ ಅರಣ್ಯ ಇಲಾಖೆಯು ಜನರಲ್ಲಿನ ಆತಂಕವನ್ನು ಸದ್ಯದ ಮಟ್ಟಿಗೆ ದೂರಮಾಡಿದೆ. ಇತ್ತೀಚೆಗೆ ಕಾಡಾನೆಗಳು ಮಾಯಾ ಮುಡಿ ಸಮೀಪದ ತೋಟಗಳಲ್ಲಿ ಬೀಡು ಬಿಟ್ಟು ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಭಯಪಡುವ ಸ್ಥಿತಿಯನ್ನು ನಿರ್ಮಾಣಮಾಡಿ, ರಸ್ತೆಗಳಲ್ಲಿ ಓಡಾಡಲೂ ಜನರು ಹೆದರುವಂತೆ ಮಾಡುವ ಮೂಲಕ ಭೀತಿ ಯನ್ನು ಉಂಟುಮಾಡಿತ್ತು….