ಮಲಗಲು ಮಂಚವಿಲ್ಲ…. ಕುಡಿಯಲು ಶುದ್ಧ ನೀರಿಲ್ಲ…. ವಿದ್ಯಾರ್ಥಿಗಳು ಹೈರಾಣ ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಾಗಿ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ವೈದ್ಯರಾಗಬೇಕು ಎಂದು ಕನಸು ಹೊತ್ತು ರಾಜ್ಯದ ನಾನಾ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಚಾಮ ರಾಜನಗರಕ್ಕೆ ಆಗಮಿಸಿರುವ ವಿದ್ಯಾರ್ಥಿ ಗಳು ಉಳಿದುಕೊಂಡಿರುವ ಹಾಸ್ಟೆಲ್ ನಲ್ಲಿ ಶುದ್ಧ ಕುಡಿಯುವ ನೀರು ದೊರೆ ಯುತ್ತಿಲ್ಲ. ನೀಡುವ ತಿಂಡಿಯಲ್ಲಿ ಜಿರಳೆ ಇದ್ದುದ್ದನ್ನು ನೋಡಿದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಮಲಗಲು ಮಂಚ ಇಲ್ಲದೇ ನೆಲದಲ್ಲಿ…