ಚಾಮರಾಜನಗರ: – ಯುಜಿಸಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮರು ಮಾನ್ಯತೆ ನೀಡುವಂತೆ ಚಾಮರಾಜನಗರದ ಸಂಸದ ಆರ್.ಧ್ರುವನಾರಾಯಣ್ ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ನಿಯಮಾವಳಿಗಳಂತೆ ಕೆಎಸ್ಒಯು ತನ್ನ ವ್ಯಾಪ್ತಿಯ ಹೊರಗಡೆ ಮಾಡಿಕೊಂಡಂತಹ ತಾಂತ್ರಿಕ, ಅರೆ ವೈದ್ಯಕೀಯ ಮತ್ತು ಮ್ಯಾನೆಜ್ಮೆಂಟ್ ಕೋರ್ಸ್ಗಳಿಗೆ ಮಾತ್ರ ಮಾನ್ಯತೆ ನಿರ್ಬಂಧಿಸಬೇಕಿತ್ತು. ಆದರೆ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ಎಲ್ಲಾ ಕೋರ್ಸ್ಗಳ ಮಾನ್ಯತೆಯನ್ನು ತೆಗೆದು ಹಾಕಿದೆ. 2013-14 ನೇ ಸಾಲಿಗಾಗಿ…