ಮಹಾಘಟಬಂಧನ್ಗೆ ಭಾರೀ ಆಘಾತ ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ಬುಧ ವಾರ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖ ನಾಯಕರು ಸೇರಿ ದಂತೆ ಎಲ್ಲಾ ನಾಯಕರೂ ದಿಗ್ಭ್ರಮೆಗೆ ಒಳಗಾಗುವಂತಹ ಪ್ರಸಂಗ ನಡೆಯಿತು. ಪ್ರತಿಪಕ್ಷಗಳ ಮಹಾಘಟಬಂಧನದ ಭಾಗವಾಗಿರುವ, ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಂಸದ ಮುಲಾಯಂಸಿಂಗ್ ಯಾದವ್ ಆಡಿದ ಮಾತುಗಳೇ ಈ ದಿಗ್ಭ್ರಮೆಗೆ ಕಾರಣವಾದವು. `ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ’ ಎಂಬ ಹಾರೈಕೆಯ ಮಾತುಗಳನ್ನು ಮುಲಾಯಂ ಆಡಿದ್ದು ರಾಷ್ಟ್ರ ರಾಜಕಾರಣದಲ್ಲಿ…