ಮೈಸೂರು: ಕಷ್ಟಪಟ್ಟು ಸಂಪಾದಿಸಿದ ಹಣವನ್ನು, ಬೇರೊಬ್ಬರಿಗೆ ಸಾಲವಾಗಿ ನೀಡಿದ್ದ ತಾಯಿಯೊಂದಿಗೆ ಜಗಳ ವಾಡಿದ ಯುವಕನೋರ್ವ ನಾಪತ್ತೆಯಾಗಿರುವ ಪ್ರಕರಣ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಕಡಕೊಳದ ನಿವಾಸಿ ಲಕ್ಷ್ಮೀ ಅವರ ಪುತ್ರ ಚೇತನ್ (22), ನಾಪತ್ತೆಯಾಗಿರುವ ಯುವಕನಾಗಿದ್ದು, ಈತ ಟಿವಿಎಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಲಕ್ಷ್ಮೀ ಅವರು ಪರಿಚಿತರಾದ ಶಂಕರ್ ಎಂಬುವರಿಗೆ ಸಾಲವಾಗಿ ಹಣ ನೀಡಿದ್ದರು. ಶಂಕರ್ ಪತ್ನಿ ಮಹಾದೇವಿ ಅವರು ಹಣವನ್ನು ವಾಪಸ್ಸು ನೀಡುವುದಾಗಿ ಜೂ.26ರಂದು ತಮ್ಮ ಮನೆಯ ಬಳಿಗೆ ಕರೆಸಿಕೊಂಡಿದ್ದರು. ಆಗ ಹಣದ…