ಮಳವಳ್ಳಿ: ಶಾಲಾ ಬಾಲಕನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, 35ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬುಳ್ಳಿಕೆಂಪನದೊಡ್ಡಿ ಬಳಿಯ ಮೈಸೂರು-ಮಳವಳ್ಳಿ ಹೆದ್ದಾರಿಯಲ್ಲಿ ನಡೆದಿದೆ. ತಿ.ನರಸೀಪುರ ತಾಲೂಕಿನ ಕುಳ್ಳಯ್ಯನದೊಡ್ಡಿ ಗ್ರಾಮದ ಲೆ.ರಾಜಣ್ಣ ಎಂಬುವರ ಪುತ್ರ ಮಹೇಶ್ (38) ಸಾವನ್ನಪ್ಪಿದವರು. ತೀವ್ರ ಗಾಯಗೊಂಡಿದ್ದ ಬಸಮ್ಮಣ್ಣಿ, ಬಸವರಾಜು, ಲಕ್ಕೇಗೌಡ ಎಂಬುವ ರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಗಾಯಾಳುಗಳಾದ ತಿ.ನರಸೀಪುರ ತಾಲೂಕಿನ ವ್ಯಾಸರಾಜನಪುರ ಗ್ರಾಮದ ಕೃಷ್ಣ, ಮಹಾಲಕ್ಷ್ಮಿ, ಕೇತುಪುರ ಬಸವರಾಜು, ಕೆಬ್ಬೆ ಗ್ರಾಮದ ಮಹದೇವ, ದೊಡ್ಡಪುರ…