ಮೈಸೂರು: ವಿವಿಧ ಕ್ಷೇತ್ರಗಳ ನುರಿತ ವೃತ್ತಿ ಪರರನ್ನು ಸಾರ್ವಜನಿಕರಿಗೆ ಒಂದೇ ವೇದಿಕೆಯಲ್ಲಿ ಪರಿಚಯಿಸುವುದಕ್ಕಾಗಿ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಮೈಸೂರು ಪಂಡಿತ್’ ಹೊಸ ವೆಬ್ಸೈಟ್ ಅನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಕಾರ್ಯ ಕ್ರಮದಲ್ಲಿ ಕೃಷಿ ತಜ್ಞ ಡಾ.ಎಂ.ಮಹದೇವಪ್ಪ ಅನಾವರಣಗೊಳಿಸಿದರು. ನೂತನ ವೆಬ್ಸೈಟ್ಗೆ ಚಾಲನೆ ನೀಡಿದ ಬಳಿಕ ಡಾ.ಎಂ.ಮಹದೇವಪ್ಪ ಮಾತನಾಡಿ, ವೃತ್ತಿಪರರಾದ ವೈದ್ಯರು, ಇಂಜಿನಿಯರ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ನುರಿತ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದಕ್ಕಾಗಿ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ…