ಮಂಡ್ಯ: ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಅಡಿ ಸಿಲುಕಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಕಮೀಷ್ನರ್ ಆಗಿದ್ದ ನಿವೃತ್ತ ಜಿಲ್ಲಾಧಿಕಾರಿ ಎಸ್. ಎನ್.ನಾಗರಾಜು (62) ಅವರು ಇಂದು ಬೆಳಿಗ್ಗೆ ಪಾಂಡವಪುರ ತಾಲೂಕು ದೊಡ್ಡ ಬ್ಯಾಡರಹಳ್ಳಿಯಲ್ಲಿ ಸಾವನ್ನಪ್ಪಿದ್ದಾರೆ. ಮೂಲತಃ ರೈತರ ಮಗನಾಗಿದ್ದ ನಾಗರಾಜು, ಹುಟ್ಟೂರಿಗೆ ತೆರಳಿ ತಮ್ಮ ಜಮೀನಿನಲ್ಲಿ ತಾವೇ ಬೇಸಾಯ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಮಾವು, ಸಪೋಟ, ತೆಂಗು, ಪರಂಗಿ ಬೆಳೆಯನ್ನು ಸಮೃದ್ಧವಾಗಿ ಬೆಳೆದು `ಪ್ರಗತಿ ಪರ ರೈತ’ ಎನಿಸಿಕೊಂಡಿದ್ದರು. ತಾವೇ ಟ್ರ್ಯಾಕ್ಟರ್ ನಲ್ಲಿ…