ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮಂಗಳವಾರ ಜರುಗಿದ ಶ್ರೀಕಂಠೇಶ್ವರಸ್ವಾಮಿಯ ಗೌತಮ ಪಂಚಮಹಾರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ರಥೋತ್ಸ ವದಲ್ಲಿ ಪಾಲ್ಗೊಂಡು, ತಮ್ಮ ಭಕ್ತಿಭಾವ ಮೆರೆದರು. ರಥದ ಹಗ್ಗ ಕಿತ್ತು ಕೆಲಕಾಲ ರಥೋತ್ಸವಕ್ಕೆ ಅಡಚಣೆಯಾದರೂ ಯಾವುದೇ ಅಹಿತಕರ ಘಟನೆ ಸಂಭವಿಸ ಲಿಲ್ಲ. ರಥ ಚಲನೆಯಲ್ಲಿ ವಿಳಂಬ ವಾದರೂ ಭಕ್ತರ ಹರ್ಷೋದ್ಘಾರ ದೊಂದಿಗೆ ಗೌತಮ ರಥ ಸೇರಿ ದಂತೆ ಪಂಚ ರಥಗಳು 11.35 ಗಂಟೆ ಸುಮಾರಿಗೆ ಸ್ವಸ್ಥಾನ ತಲುಪಿದವು. ಬೆಳಿಗ್ಗೆ 6.40 ರಿಂದ 7 ಗಂಟೆಯೊಳಗೆ…