ಮೈಸೂರು: ಮಂಗಳಮುಖಿ ಎ.ರೇವತಿ ರಚನೆಯ `ನನ್ನ ದನಿ’ ನಾಟಕ ಪ್ರದರ್ಶನವನ್ನು ಕದಂಬ ರಂಗವೇದಿಕೆ ವತಿಯಿಂದ ಜೂ.10ರ ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಂಗಳಮುಖಿಯಾದ ಎ.ರೇವತಿಯವರ ಜೀವನಾಧಾರಿತವಾಗಿ ರಚಿತವಾಗಿರುವ `ಎನ್ನ ಕೊರಳ್ ತಮಿಳ್’ ನಾಟಕವನ್ನು ಅವರೇ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ…