ಮೈಸೂರು: ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾ ಲಯ ಮತ್ತು ಆಸ್ಪತ್ರೆ, ಪಂಚಕರ್ಮ ಸ್ನಾತಕೋತ್ತರ ವಿಭಾಗದವರು ಹಮ್ಮಿಕೊಂಡಿದ್ದ 6 ದಿನಗಳ ರಾಷ್ಟ್ರೀಯ ಪಂಚಕರ್ಮ ಕಾರ್ಯಾಗಾರ (ಎಲ್ಎಂಇ)ವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರಿನ ಉಪನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ನಂತರ ಮಾತನಾಡುತ್ತಾ, ಆಯುರ್ವೇದದಲ್ಲಿ ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಂಕಿ-ಅಂಶಗಳ ಸಂಶೋಧನಾತ್ಮಕ ಪುರಾವೆಗಳ ಅಗತ್ಯಗಳ ಕುರಿತು ವಿವರಿಸಿದರು. ಮುಂಬರುವ ದಿನಗಳಲ್ಲಿ ಆಶಾ ಕಾರ್ಯಕರ್ತರಿಗೆ ಆಯುರ್ವೇದದ ಮೂಲಭೂತ ಚಿಕಿತ್ಸೆಗಳ ಅರಿವು ಮೂಡಿಸಲು…