ಬೆಂಗಳೂರು: ಇನ್ನು ಮುಂದೆ ರಾಜ್ಯದ ಮಹಿಳಾ ಪೊಲೀಸರು ಸಮವಸ್ತ್ರವಾಗಿ ಪ್ಯಾಂಟ್-ಶರ್ಟ್ ಧರಿಸಲೇಬೇಕು ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಶನಿ ವಾರ ಆದೇಶ ಹೊರಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹಿಳಾ ಪೊಲೀಸರು ಖಾಕಿ ಸೀರೆ ಧರಿಸುತ್ತಿದ್ದರು. ಅದಕ್ಕೆ ಇಲಾಖೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ಸುತ್ತೋಲೆಯಲ್ಲಿ ಖಾಕಿ ಸೀರೆ ಧರಿಸುವ ಪದ್ಧತಿಗೆ ಅಂತ್ಯ ಹಾಡಲಾಗಿದೆ. 2018ರ ಸೆ.3ರಂದು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿಪಿ ನೀಲಮಣಿ ರಾಜು ಅವರ ನೇತೃತ್ವದ ಸಮವಸ್ತ್ರದ ಕುರಿತಾದ ಸಮಿತಿ ಸಭೆಯಲ್ಲಿ…
ಕೊಡಗು
ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು
August 25, 2018ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಇದುವರೆಗೆ ಒಟ್ಟು 10 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ನಾಲ್ವರು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದೆ. ನಾಪತ್ತೆಯಾಗಿರುವವರ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕಿ ನೀಲಮಣಿ ರಾಜು ತಿಳಿಸಿದರು. ಮಡಿಕೇರಿಯ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕೃತಿ ವಿಕೋಪಕ್ಕೆ ತುತ್ತಾದವರ ನೆರವಿಗಾಗಿ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿಗಳ ಒಂದು ದಿನದ…