ಮೈಸೂರು: ಆಪರೇಷನ್ ಚಾಮುಂಡಿ ತೀವ್ರಗೊಳಿಸಿರುವ ಮೈಸೂರಿನ ಕೆ.ಆರ್.ಠಾಣೆ ಪೊಲೀಸರು, ವಾರದಲ್ಲಿ 28 ಪ್ರಕರಣಗಳನ್ನು ದಾಖಲಿಸಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಹುಡುಗಿಯ ರೊಂದಿಗೆ ಚೆಲ್ಲಾಟ, ಅಡ್ಡಾದಿಡ್ಡಿ ವಾಹನ ಚಾಲನೆ, ಬೆದರಿಸಿ ಹಣ-ಆಭರಣ ದೋಚುವುದು, ಸರ ಅಪಹರಣಗಳಂ ತಹ ಅಪರಾಧ ಚಟುವಟಿಕೆಯನ್ನು ನಿಯಂತ್ರಿಸುವ ಸಲುವಾಗಿ 2010ರಲ್ಲಿ ಆರಂಭವಾದ ‘ಆಪರೇಷನ್ ಚಾಮುಂಡಿ’ಯನ್ನು ತೀವ್ರಗೊಳಿಸಿರುವ ಪೊಲೀ ಸರು, ಗರುಡ-ಚೀತಾ ವಾಹನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ 1 ವಾರದಲ್ಲಿ 28 ಪ್ರಕ ರಣಗಳನ್ನು ದಾಖಲಿಸಿಕೊಂಡಿರುವ ಕೆ.ಆರ್.ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್, ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ…