ಚಾಮರಾಜನಗರ: ‘ರೈತರು ಜಮೀನಿನಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಳವಾಗುವ ಜೊತೆಗೆ ಅಧಿಕ ಇಳುವರಿ ದೊರೆಯಲಿದೆ’ ಎಂದು ವಲಯ ಕೃಷಿ ತಜ್ಞ ಎನ್.ಕೇಶವನ್ ಸಲಹೆ ನೀಡಿದರು. ನಗರದ ಖಾಸಗಿ ಹೋಟೆಲ್ನಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಫೈನಾಷಿಯಾ ಲಿಮಿಟೆಡ್ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಬಾಳೆ ಮತ್ತು ಅರಿಶಿನ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶುಂಠಿ ಮತ್ತು ಅರಿಶಿಣ ಬೆಳೆಯಲ್ಲಿ ಐಪಿಎಲ್ ಕಂಪೆನಿಯ ಪ್ರತಿಜ್ಞೆ ಸುರಕ್ಷಿತ ಭೂಮಿಗೆ ಅಧಿಕ ಇಳುವರಿ…