ಮೈಸೂರು: ಕೃಷಿ ಮಾರಾಟ ಅಧ್ಯಯನ ಕೇಂದ್ರದ ಆವರಣದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಸಾವಯವ ಕೃಷಿ ಪದ್ಧತಿಯಡಿ ಬೆಳೆದಿರುವ ಮಾವಿನ ಹಣ್ಣಿನ ಮಾರಾಟ ಮೇಳದಲ್ಲಿ ಏಕೈಕ ಮಳಿಗೆಯಲ್ಲಿದ್ದ ಮಾವು ಖರೀದಿಸಲು ಜನ ಮುಗಿಬಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಈ ಮೇಳದಲ್ಲಿ ಕೇವಲ ಒಂದೇ ಒಂದು ಮಳಿಗೆ ಮಾತ್ರ ತೆರೆಯಲಾಗಿತ್ತು….