ನವದೆಹಲಿ: ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪುರಸ್ಕಾರ ಪಟ್ಟಿ ಶುಕ್ರವಾರ ರಾತ್ರಿ ಘೋಷಣೆಯಾಗಿದ್ದು, ಕರ್ನಾಟಕದ ಐವರು ಸೇರಿದಂತೆ ಒಟ್ಟು 112 ಸಾಧಕರು ಪ್ರತಿಷ್ಠಿತ ನಾಗರಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ನಾಲ್ವರಿಗೆ ಪದ್ಮವಿಭೂಷಣ, 14 ಸಾಧಕರಿಗೆ ಪದ್ಮಭೂಷಣ, 94 ಗಣ್ಯರಿಗೆ ಪದ್ಮಶ್ರೀ ಪುರಸ್ಕಾರ ಘೋಷಣೆಯಾಗಿದೆ. ಕರ್ನಾಟಕದ ಸಾಧಕರು: ಪರಿಸರ ಪ್ರೀತಿಯ ಸಾಲು ಮರದ ತಿಮ್ಮಕ್ಕ, ಖ್ಯಾತ ಸರೋದ್ ವಾದಕರೂ ಆದ ಮೈಸೂರಿನ ರಾಜೀವ್ ತಾರಾನಾಥ್, ತಿ.ನರಸೀಪುರ ತಾಲೂಕಿನ ಮೂಗೂರು ಮೂಲದ ಚಿತ್ರ ನಿರ್ದೇಶಕ, ನಟ,…