ಮಾಜಿ ರಾಯಭಾರಿ, ಶ್ರೇಷ್ಠ ಬರಹಗಾರ ಪವನ್ ವರ್ಮಾ ಪ್ರತಿಪಾದನೆ ಮೈಸೂರು: ಹಿಂದುತ್ವವೂ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ ಎಂಬುದನ್ನು ಮಾಜಿ ರಾಯಭಾರಿ ಹಾಗೂ ಶ್ರೇಷ್ಠ ಬರಹಗಾರ ಪವನ್ ವರ್ಮಾ ಅವರು ಅರ್ಥಗರ್ಭಿತವಾಗಿ ವಿವರಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ಸೆನೆಟ್ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ ಇಂದು ಏರ್ಪ ಡಿಸಿದ್ದ ‘ಮೈಸೂರು ಲಿಟರರಿ ಫೆಸ್ಟ್-2018’ ರಲ್ಲಿ ಭಾಗವಹಿಸಿ, ‘ಹಿಂದೂ ತತ್ವಶಾಸ್ತ್ರದಲ್ಲಿ ಆದಿ ಶಂಕರಾಚಾರ್ಯರು ಪ್ರಸ್ತಾಪಿಸಿದ ಅದ್ಭುತ ನಿರೂಪಣೆ’ ಕುರಿತು ವಿಚಾರ ಮಂಡಿಸಿದ ಅವರು, ಶಿಕ್ಷಣದಲ್ಲಿ ಪುರಾತನ…