ಮೈಸೂರು: ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಉಳಿದುಕೊಂಡಿದ್ದ ಮೈಸೂರಿನ ಪ್ರೆಸಿಡೆಂಟ್ ಹೋಟೆಲ್, ಕಾರ್ಯಕರ್ತರ ಆಕ್ರೋಶದಿಂದ ರಣಾಂಗಣ ವಾಗಿ ಮಾರ್ಪಟ್ಟಿತ್ತು. ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ಯಡಿ ಯೂರಪ್ಪನವರು ಮೈಸೂರಿಗೆ ಬಂದು ಈ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈ ವಿಷಯ ತಿಳಿದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಹೋಟೆಲ್ ಮುಂಭಾಗ ಜಮಾಯಿಸಿದರು. ಸಮಯ ಕಳೆದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚಾ ಯಿತು. ಹೊಟೆಲ್ನ ಒಳ ಪ್ರಾಂಗಣದಲ್ಲಿದ್ದ ಯಡಿಯೂರಪ್ಪನವರ ಬಳಿ ತೆರಳಿದ ಕಾರ್ಯಕರ್ತರು,…