ನವದೆಹಲಿ: ರಾಷ್ಟ್ರಪತಿ ಭವನದ ಸಭಾಂಗಣ ಇಂದು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕನ್ನಡಿಗ ಶತಾಯುಷಿಯೊಬ್ಬರು ಶಿರಮುಟ್ಟಿ ಆಶೀರ್ವದಿಸಿದರು. ಈ ಅನಿರೀಕ್ಷಿತ ಘಟನೆಯಿಂದ ಸಭಾಂಗಣ ಒಂದು ಕ್ಷಣ ಅಚ್ಚರಿಗೊಳಗಾಯಿತು. ಕ್ಯಾಮರಾಗಳ ಫ್ಲ್ಯಾಷ್ಗಳು ತುಸು ಹೆಚ್ಚೇ ಬೆಳಕು ಚೆಲ್ಲಿದವು. ಈ ಪ್ರಸಂಗಕ್ಕೆ ಕಾರಣವಾಗಿದ್ದು, ಕರ್ನಾಟಕದ ಸಾಲು ಮರದ ತಿಮ್ಮಕ್ಕ! ರಾಷ್ಟ್ರಪತಿಗಳು ಶನಿವಾರ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್, ಪರ್ವತಾರೋಹಿ ಬಚೇಂದ್ರಿ ಪಾಲ್, ಜಾನಪದ ಗಾಯಕಿ ತೀಜನ್ ಬಾಯಿ, ಪರಿಸರ ಪ್ರೇಮಿ,…