ಮೈಸೂರು: ಡಾ.ಬಿ.ಷೇಕ್ ಅಲಿ ಅವರ `ಗ್ರೌಂಡ್ ವರ್ಕ್ ಆಫ್ ಕರ್ನಾಟಕ ಹಿಸ್ಟರಿ’, ಪ್ರೊ. ಬಿ.ಪರಮೇಶ್ವರ್ ಅವರ `ಕರ್ನಾಟಕ ಇತಿ ಹಾಸ ಪರಿಚಯ’, `ಭಾರತದ ಸ್ವಾತಂತ್ರ್ಯ ಚಳುವಳಿ’ ಮತ್ತು ಮಹೇಶ್ ಅಗಸರಹಳ್ಳಿ ಅವರ `ಕನ್ನಡ ಸಾಹಿತ್ಯ ಮತ್ತು ವ್ಯಾಕರಣ’ ಕೃತಿಗಳನ್ನು ವಿಶ್ರಾಂತ ಕುಲಪತಿ ಡಾ.ಬಿ. ಷೇಕ್ ಅಲಿ ಭಾನುವಾರ ಮೈಸೂರಿನ ವಿದ್ಯಾಭವನದಲ್ಲಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹವು ಭಾರತದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿ ಮಾಡಿತು. ಅಹಿಂಸೆ ಬೇಡ ಎಂದು ಶಾಂತಿಯ ಮಾರ್ಗ…