ಮೈಸೂರು: ನಮ್ಮ ಮೂರ್ಖತನದಿಂದಾಗಿ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಂತಾಯಿತು. ಅಂದು ನಾವು ಸ್ವಲ್ಪ ಎಚ್ಚರವಾಗಿದ್ದರೆ, ಜಾಗೃತರಾಗಿದ್ದರೆ, ಸಂಘಟಿತರಾಗಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿದ್ದರೇ? ಮೋದಿಯವರ ಗೆಲುವಿನ ಹಿಂದೆ ನಮ್ಮ ಅಸಹಾಯಕತೆ, ನಮ್ಮ ವಿಘಟನೆ ಇದೆ ಎಂದು ವಿಚಾರವಾದಿ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಕಾಯಕಯೋಗಿ ವಿಕಾಸ ವೇದಿಕೆ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ ಸಂದರ್ಭದಲ್ಲಿ `ಪ್ರಸ್ತುತ ರಾಜಕಾರಣದಲ್ಲಿ ಸಮಾಜ ಮತ್ತು ಯುವಶಕ್ತಿಯ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ `ಪ್ರಸ್ತುತ…