ಹಾಸನ: ನಮ್ಮನ್ನು ಒಡೆದು ಆಳುವ ಶಕ್ತಿಗಳ ವಿರುದ್ಧ ಜಾಗೃತರಾದಾಗ ಮಾತ್ರ ಎಲ್ಲರೂ ಒಂದಾಗಿ ಬಾಳುವ ಆದರ್ಶದ ಕನಸು ನನಸಾಗುತ್ತದೆ ಎಂದು ವಾಗ್ಮಿ ಪ್ರೊ.ಕೃಷ್ಣೇಗೌಡ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ವತಿಯಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 58ನೇ ಹುಣ ್ಣಮೆ ಕಾರ್ಯಕ್ರಮದಲ್ಲಿ ‘ಒಂದಾಗಿ ಬಾಳು’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಮನುಷ್ಯರ ರೂಪ, ಬಣ್ಣ ಬೇರೆ ಇದ್ದರೂ ನಾವೆಲ್ಲಾ ಮೂಲತಃ ಒಂದೇ ಎಂಬ…