ಮೈಸೂರು: ನನ್ನ ಜೀವನದಲ್ಲಿ ಆದಂತಹ ನೋವು ಮರೆಯಲು ನಾನು ಆಯ್ದುಕೊಂಡದ್ದೇ ಕಾವ್ಯ. ಹೀಗಾಗಿ ಕಾವ್ಯ ನನ್ನನ್ನು ಬದುಕಿಸಿದೆ. ಹೀಗೆಂದು ಹೇಳಿದವರು ಕನ್ನಡದ ಹಿರಿಯ ಸಾಹಿತಿ, ಪ್ರೊರಾಗೌ ಎಂದು ಪರಿಚಿತರಾಗಿರುವ ಪ್ರೊ.ಎಂ.ರಾಮೇಗೌಡ. ಕನ್ನಡ ರಾಜ್ಯೋತ್ಸವ ಅಂಗವಾಗಿ ಮೈಸೂರಿನ ಸಂವಹನ ಟ್ರಸ್ಟ್ ಜೆಎಸ್ಎಸ್ ರಾಜೇಂದ್ರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಸಾಹಿತಿಗಳಿಗೆ ಸನ್ಮಾನ ಮತ್ತು ಸಂವಹನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ತಮ್ಮ ನೋವಿನ ಹಲವು ಸಂಗತಿಗಳನ್ನು ಹಂಚಿಕೊಂಡರು. ನನ್ನ ಮೊದಲ ಆಸಕ್ತಿ ಕಾವ್ಯ. ಅದು ಕೊನೆಯ…