ಮೇಲುಕೋಟೆ: ನಮ್ಮ ಪೂರ್ವಿಕರು ಮಳೆ ನೀರು ಸಂಗ್ರಹ ತಂತ್ರ ಜ್ಞಾನವನ್ನು ಮೇಲುಕೋಟೆ ಕಲ್ಯಾಣಿಗಳ ನಿರ್ಮಾಣದ ಮೂಲಕ ಶತಮಾನಗಳ ಹಿಂದೆಯೇ ನಮಗೆ ತೋರಿಸಿ ಕೊಟ್ಟಿದ್ದಾರೆ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ರಾಮ ರಾಜು ತಿಳಿಸಿದರು. ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ಡಿಎಸ್ಸಿಇ ಸಮುದಾಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನೀರು ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ನಾವು ಮಳೆ…