ಮೈಸೂರು: ಮೈಸೂರು ವಿವಿಯಿಂದ, ಕುದುರೆಮಾಳ, ಸರಸ್ವತಿಪುರಂ, ಶ್ರೀರಾಂಪುರ 2ನೇ ಹಂತದ ಮೂಲಕ ಮುಂದಕ್ಕೆ ಸಾಗುವ ಬೃಹತ್ ರಾಜಕಾಲುವೆಯ ಮಾರ್ಗದ ಮಧ್ಯದ ಕಿರಿದಾದ ಕಾಲುವೆಯನ್ನು ದುರಸ್ತಿ (ಕೃಷ್ಣಧಾಮದಿಂದ 353/ಎ ನಂಬರಿನ ಮನೆಯವರೆಗೆ) ಮಾಡಬೇಕೆಂದು ವಲಯ ಕಚೇರಿ-3ರ ಸಹಾಯಕ ಇಂಜಿನಿಯರ್ ನೀಡಿದ್ದ ವರದಿಯನ್ನು ತಿದ್ದಿದವರು ಯಾರು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವಿಸ್ ರಸ್ತೆ ಮತ್ತೆ ಸಾರ್ವಜನಿಕರ ಕೈ ತಪ್ಪುವಂತಿದೆ….