ಮಂಡ್ಯ: ‘ದೇಶದ ವಿಜ್ಞಾನಿ ಗಳ ಸಾಧನೆ, ಇಡೀ ಪ್ರಪಂಚಕ್ಕೇ ಮಾದರಿಯಾಗಿದೆ. ಒಂದೇ ಬಾರಿಗೆ 105 ಸ್ಯಾಟ್ಲೆಟ್ಗಳನ್ನು ಉಡಾ ವಣೆ ಮಾಡುವ ಮೂಲಕ ಇತರೆ ದೇಶಗಳು ಮಾಡಲಾಗದ ಸಾಧನೆಯನ್ನು ನಮ್ಮ ವಿಜ್ಞಾನಿ ಗಳು ಮಾಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಶ್ರೀಗುರುಪೂರ್ಣಿಮ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮಟ್ಟದ 22ನೇ ಚುಂಚಾದ್ರಿ ಕಲೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷದಲ್ಲಿ 200 ವರ್ಷಗಳ…