ಮೈಸೂರು: ಮೈಸೂರಿ ನಲ್ಲಿ ನಾಳೆ(ನ.28)ಯಿಂದ ನಾಲ್ಕು ದಿನಗಳ ಕಾಲ ರಣಜಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಮೊದಲೆರಡು ಪಂದ್ಯಗಳಲ್ಲಿ ವಿದರ್ಭ ಹಾಗೂ ಮುಂಬಯಿ ತಂಡಗಳೊಂದಿಗೆ ಸೆಣಸಾಡಿ ಡ್ರಾ ಸಾಧನೆಯೊಂದಿಗೆ ಒಟ್ಟು 6 ಅಂಕ ಪಡೆದಿರುವ ಕರ್ನಾಟಕ ತಂಡ, ಇದೀಗ ಮಹಾರಾಷ್ಟ್ರದ ವಿರುದ್ಧ ಉತ್ತಮ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಉಭಯ ತಂಡಗಳ ಆಟಗಾರರು ಇಂದು…