ಇಂದಿನಿಂದ ಮೈಸೂರಲ್ಲಿ ರಣಜಿ
ಮೈಸೂರು

ಇಂದಿನಿಂದ ಮೈಸೂರಲ್ಲಿ ರಣಜಿ

November 28, 2018

ಮೈಸೂರು:  ಮೈಸೂರಿ ನಲ್ಲಿ ನಾಳೆ(ನ.28)ಯಿಂದ ನಾಲ್ಕು ದಿನಗಳ ಕಾಲ ರಣಜಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಮೊದಲೆರಡು ಪಂದ್ಯಗಳಲ್ಲಿ ವಿದರ್ಭ ಹಾಗೂ ಮುಂಬಯಿ ತಂಡಗಳೊಂದಿಗೆ ಸೆಣಸಾಡಿ ಡ್ರಾ ಸಾಧನೆಯೊಂದಿಗೆ ಒಟ್ಟು 6 ಅಂಕ ಪಡೆದಿರುವ ಕರ್ನಾಟಕ ತಂಡ, ಇದೀಗ ಮಹಾರಾಷ್ಟ್ರದ ವಿರುದ್ಧ ಉತ್ತಮ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಉಭಯ ತಂಡಗಳ ಆಟಗಾರರು ಇಂದು ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ.

ದಸರಾ ಕ್ರೀಡಾಕೂಟ ಹಾಗೂ ಕೆಪಿಎಲ್ ಪಂದ್ಯಾವಳಿಯನ್ನು ವೀಕ್ಷಿಸಿ, ಸಂಭ್ರಮಿಸಿ ರುವ ಮೈಸೂರಿನ ಕ್ರಿಕೆಟ್ ಪ್ರೇಮಿಗಳು, ಇದೀಗ 4 ದಿನಗಳ ಕಾಲ ರಣಜಿ ರಸ ದೌತಣ ಸವಿಯಬಹುದು. ನಾಳೆ(ನ.28) ಯಿಂದ ಡಿ.1ರವರೆಗೆ ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಪಂದ್ಯ ನಡೆಯಲಿದ್ದು, ವೀಕ್ಷಕರಿಗೆ ಉಚಿತ ಪ್ರವೇಶಾವಕಾಶವಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆ ಯರ್ ಮೈದಾನ 2006ರಿಂದಲೂ ಆತಿಥ್ಯ ನೀಡುತ್ತಿದ್ದು, ಕರ್ನಾಟಕ ಹಾಗೂ ಮುಂಬಯಿ ತಂಡಗಳ ನಡುವಿನ ರಣಜಿ ಫೈನಲ್ ಸೇರಿದಂತೆ ಈವರೆಗೆ 13 ರಣಜಿ ಪಂದ್ಯ ಗಳು ನಡೆದಿವೆ. ಭಾರತ ಹಾಗೂ ವೆಸ್ಟ್ ಇಂಡೀಸ್ ಎ ತಂಡಗಳ ಪಂದ್ಯ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ಟೆಸ್ಟ್ ಆಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »