ಮೈಸೂರು: ಮೈಸೂರಿನಲ್ಲಿ ಇಂದಿನಿಂದ ಆರಂಭಗೊಂಡಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡ ಎದುರಾಳಿ ಮಹಾರಾಷ್ಟ್ರ ತಂಡದ ಎಲ್ಲಾ ವಿಕೆಟ್ಗಳನ್ನು ಪತನಗೊಳಿಸುವ ಮೂಲಕ ಮೊದಲ ದಿನದ ಅಂತ್ಯಕ್ಕೆ ಮೇಲುಗೈ ಸಾಧಿಸಿತು. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನ ದಲ್ಲಿ (ಗ್ಲೇಡ್ಸ್) ಇಂದಿನಿಂದ ನಾಲ್ಕು ದಿನ ಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 85ನೇ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4ನೇ ಸುತ್ತಿನ ತನ್ನ 3ನೇ ಪಂದ್ಯದ ಮೊದಲ ದಿನದಾಟದಲ್ಲಿ (ಬುಧ ವಾರ) ಕರ್ನಾಟಕ ತಂಡದ ಮಾರಕ ಬೌಲಿಂಗ್ನಿಂದ…