ಮೈಸೂರು: ಸುದ್ದಿ ವಾಹಿನಿಗಳು ಟಿ.ಆರ್.ಪಿ ವಿಧಾನಕ್ಕೆ ಬದಲಾಗಿ ಪರ್ಯಾಯ ವಿಧಾನ ಕಂಡುಕೊಳ್ಳಬೇಕಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿಹೆಗಡೆ ಅಭಿಪ್ರಾಯಪಟ್ಟರು. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಜನಕೇಂದ್ರೀತವಾಗುವ ಬದಲು ಹೆಚ್ಚು ವಾಣಿಜ್ಯ ಕೇಂದ್ರೀತವಾದ ಹಿನ್ನೆಲೆಯಲ್ಲಿ ಸಾಂಪ್ರದಾಯಕವಾಗಿ ನಡೆದು ಬಂದ ದೂರದರ್ಶನ ಹಾಗೂ ಮುದ್ರಣ ಮಾಧ್ಯಮದಲ್ಲಿ ಇದೀಗ ವಿಶ್ವಾಸಾರ್ಹತೆಯ ಕೊರತೆ ಮೂಡಿದೆ. ಸಂಪಾದಕೀಯ ಕೇಂದ್ರೀತ…