ಮೈಸೂರು: ಮೈಸೂರಿನ ಚಾಮುಂಡಿಪುರಂನಲ್ಲಿರುವ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಟಿ.ಎಸ್.ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನವನ್ನು ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ, ಕಲೆ ಮತ್ತು ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಏಕಚಿತ್ತದಿಂದ ಕಲಿತರೆ ಮಾತ್ರ ಸಾಧ್ಯವಾಗುತ್ತದೆ. ಕಲ್ಪನೆಯಲ್ಲಿ ಮೂಡುವ ಅಮೂರ್ತ ರೂಪದ ಸ್ಥಳಗಳನ್ನು ಮೂರ್ತರೂಪಕ್ಕೆ ತರುವ ಕೆಲಸ ಟಿ.ಎಸ್.ಮುರಳಿಯವರಿಂದ ಮಾತ್ರ ಸಾಧ್ಯವಾಗಿದೆ ಮೈಸೂರಿನ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಚಿತ್ರಿಸಿರುವುದು ಶ್ಲಾಘನೀಯ ಎಂದು ಕಲಾವಿದ ಟಿ.ಎಸ್.ಮುರುಳಿಯವರನ್ನು ಅಭಿನಂದಿಸಿದರು. 40 ಬಗೆಯ ಕಲಾಕೃತಿಗಳು- 5 ದಿನಗಳು…