ಮಡಿಕೇರಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನರು ತತ್ತರಿಸಿದ್ದರು. ಮನೆ ಕಳೆದುಕೊಂಡು ಚಿಂತಾಕ್ರಾಂತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಹಲವು ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಚಿಂತೆಯಲ್ಲಿದ್ದ ಸಂತ್ರಸ್ತರಿಗೆ, ಭರವಸೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಮುಂದುವರೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಸಂತ್ರಸ್ತ ಕುಟುಂಬವೊಂದರ ಮನೆ ಮಗಳ ಮದುವೆ ಸಡಗರ, ಸಂಭ್ರಮದಿಂದ ನಿರಾಶ್ರಿತ ಕೇಂದ್ರದಲ್ಲಿ ನಡೆಯಿತು. ಮಕ್ಕಂದೂರು ಗ್ರಾಮದ ರಾಟೆ ಮನೆ ಪೈಸಾರಿ ನಿವಾಸಿ ಆರ್.ಮಂಜುಳಾ ಮತ್ತು ಕೇರಳದ ಕೂತುಪರಂಬು ನಿವಾಸಿ ರಜೀಶ್ ಅವರ ವಿವಾಹ ಈ…