ಮೈಸೂರಲ್ಲಿ ನಾಳೆ 221 ಮಂದಿಗೆ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಮೈಸೂರು: ಮೈಸೂರಿನ ಹಳ್ಳದಕೇರಿ, ಮಹಾವೀರನಗರ 3ನೇ ಕ್ರಾಸ್ನಲ್ಲಿರುವ ಸ್ಥಾನಿಕ ವಾಸಿ ಜೈನ್ ಸಂಘದಲ್ಲಿ ಜು7ರಂದು ಬೆಳಿಗ್ಗೆ 11 ಗಂಟೆಗೆ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣೆ ಮತ್ತು ಪರಿಕರಗಳ ವಿತರಣಾ ಶಿಬಿರ ಆಯೋಜಿಸಲಾಗಿದೆ ಎಂದು ರಾಯಚೂರಿನ ಎಂ.ಕೆ.ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೊಹಮ್ಮದ್ ರಿಯಾಜುದ್ದೀನ್ ಇಂದಿಲ್ಲಿ ತಿಳಿಸಿದರು. ರಾಯಚೂರಿನ ರಾಜಮಲ್ ಖೇಮರಾಜ್ ಭಂಡಾರಿ ಫೌಂಡೇಷನ್ ರಾಯಚೂರಿನ ಓಪೆಕ್ ಆಸ್ಪತ್ರೆಯ ಆವರಣದಲ್ಲಿರುವ ಕೃತಕ ಕಾಲು ತಯಾರಕ ಕೇಂದ್ರ…