ಭಾರತೀನಗರ: ಇಲ್ಲಿನ ಕೂಳಗೆರೆ ಗ್ರಾಮದಲ್ಲಿ ಗಾಂಧಿ ಪಥ, ಗ್ರಾಮಪಥ ವಿಶೇಷ ಯೋಜನೆಯಡಿ 95.11 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವರು, ಗ್ರಾಮಗಳ ಅಭಿವೃದ್ಧಿಗಾಗಿ ಹಿಂದಿನಿಂದಲೂ ದುಡಿಯುತ್ತಿದ್ದೇನೆ ಮತ್ತು ಈಗ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಎಲ್ಲೇ ಇದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು. ಶಾಸಕನಾಗಿದ್ದಾಗ ವಾರದಲ್ಲಿ 6 ದಿನ ಕ್ಷೇತ್ರದಲ್ಲಿರುತ್ತಿದ್ದೆ. ಆದರೆ ಈಗ ರಾಜ್ಯದ ಅಭಿವೃದ್ಧಿ…